ಸಾಹಿತ್ಯವನ್ನು ಏಕೆ ಓದಬೇಕು?- ನಮ್ಮ ನಡುವೆ ಕಾಲಕಾಲಕ್ಕೆ ಭುಗಿದೇಳುವ ಈ ಪ್ರಶ್ನೆಗೆ ಇಲ್ಲಿ ಎಸ್ ದಿವಾಕರ್ ಉತ್ತರಿಸಿದ್ದಾರೆ. ಜಾಗತಿಕ ಸಾಹಿತ್ಯದ ಆಗು ಹೋಗುಗಳ ಕುರಿತು ಅಥೆಂಟಿಕ್ ಆಗಿ ಮಾತನಾಡಬಲ್ಲ ಸೋಮತ್ತನಹಳ್ಳಿ ದಿವಾಕರ್ ಅವರ ದೃಶ್ಯ ಸರಣಿ ಇಂದಿನಿಂದ.
ಋಣ : ರಂಗಶಂಕರದಲ್ಲಿ ತಿಂಗಳ ಪ್ರತಿ ಕೊನೆಯ ಭಾನುವಾರ ನಡೆಯುತ್ತಿರುವ ಸಾಹಿತ್ಯ ಸಹವಾಸ ಮಾಲಿಕೆ
ಸಬ್ ಟೈಟಲ್ಸ್ : ಸಂಯುಕ್ತ ಪುಲಿಗಲ್
ಪೋಸ್ಟರ್ ವಿನ್ಯಾಸ : ಸೌಮ್ಯ ಪ್ರಭು ಕಲ್ಯಾಣ್ಕರ್
coursera ಅನ್ ಲೈನ್ ಶಿಕ್ಷಣ ಪಾಠಗಳನ್ನು ನೋಡುತ್ತಿರುವಾಗ ನಮ್ಮ ಕನ್ನಡದಲ್ಲೂ ಇಂತಹದೊಂದು ಕೋರ್ಸ್ ಅನ್ನು ಯಾಕೆ ಪ್ರಾಂಭಿಸಬಾರದು ಅಂತ ನಾನು ಹಲವರಲ್ಲಿ ಕೇಳಿಕೊಂಡಿದ್ದೆ. ಪುರುಷೋತ್ತಮ ಬಿಳಿಮಲೆಯಲ್ಲೂ ಹೇಳಿದ್ದೆ.
ಬಹುಶಃ ಅದೀಗ ಆಂಶಿಕವಾಗಿ ನಿಜವಾಗುತ್ತಿದೆ. ಅದಕ್ಕಾಗಿ ನಿಮ್ಮ ತಂಡಕ್ಕೆ ಮುಖ್ಯವಾಗಿ ನಿತೇಶ್ ಮತ್ತು ದಿವಾಕರ್ ಸರ್ ಗೆ ಅಭಿನಂಧನೆಗಳು.
ಬಹಳ ಚೆನ್ನಾಗಿ ಮೂಡಿ ಬಂದಿದೆ ಎಸ್.ದಿವಾಕರ್ ರವರ ಸಾಹಿತ್ಯ ಚಿಂತನೆ ಮಾಲೆ. ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯದ ಭಿನ್ನತೆ ಹಾಗೂ ಸಾಹಿತ್ಯದ ಸೃಷ್ಟಿ ಹೇಗೆ ಆಗುತ್ತದೆ ಎನ್ನುವುದನ್ನು ಸೊಗಸಾಗಿ ವಿವರಿಸಿದ್ದಾರೆ. ಅತೃಪ್ತಿ ಸಾಹಿತ್ಯ ಸೃಷ್ಟಿಸಲು ಪ್ರೇರಣೆ ಎನ್ನುವುದು ನಿಜವಾದ ಮಾತು.
ಎಸ್.ದಿವಾಕರ್ ರವರಿಗೆ ಮತ್ತು ಇದನ್ನು ಪ್ರಾಯೋಜಿಸಿದವರಿಗೆ ಅಭಿನಂದನೆಗಳು.