ಗಾಂಧಿ ಕುಲುಮೆ : ಎಂ. ರಾಜಗೋಪಾಲ್ ಸಂದರ್ಶನ – ಭಾಗ ೫

ಎಂ. ರಾಜಗೋಪಾಲ್ ಹುಟ್ಟಿದ್ದು 1948ರ ಮೇ 1 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪೆರ್ನಾಜೆಯಲ್ಲಿ . ಕನ್ನಡ ಸಾಹಿತ್ಯದಲ್ಲಿ ಎಂ.ಎ ಮತ್ತು ಕಾನೂನು ಪದವಿ ಪಡೆದು ಎಲ್.ಐ.ಸಿ ಯಲ್ಲಿ ಉದ್ಯೋಗಿಯಾಗಿ 2008ರಲ್ಲಿ ನಿವೃತ್ತಿಗೊಂಡು ಈಗ ಉಡುಪಿಯ ಸಮೀಪ ಹಿರಿಯಡಕದಲ್ಲಿ ನೆಲೆಸಿದ್ದಾರೆ.

ತಾವೇ ಕ್ಲಿಕ್ಕಿಸಿದ ಹಿಮಾಲಯದ ಅಪೂರ್ವ ಚಿತ್ರಗಳನ್ನೊಳಗೊಂಡ ಇವರು ಬರೆದ ‘ಸಾಕಾರದಿಂದ ನಿರಾಕಾರಕ್ಕೆ’ ಹಿಮಾಲಯದ ಚಾರಣದ ಅಪರೂಪದ ಕೃತಿಗಳಲ್ಲೊಂದು. ಇವರ ಕಾದಂಬರಿ ‘ಮಂದಾರ ಮರದ ಜೇನ್ನೊಣ’ ಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ. ಇವರು ಗಾಂಧಿಯ ಬಗ್ಗೆ 13 ವರ್ಷಗಳ ಕಾಲ ಅಧ್ಯಯನ ನಡೆಸಿ ‘ಗಾಂಧೀಜಿಯ ರೂಪಕಗಳು’ ಎಂಬ ಪುಸ್ತಕ ಬರೆದಿದ್ದಾರೆ.

ಋತುಮಾನಕ್ಕಾಗಿ ಎಂ. ರಾಜಗೋಪಾಲ್ ಅವರನ್ನು ಅರವಿಂದ ಚೊಕ್ಕಾಡಿ ಸಂದರ್ಶಿಸಿದ್ದಾರೆ . ಸ್ವತ: ಲೇಖಕರೂ ಆಗಿರುವ ಅರವಿಂದ ಚೊಕ್ಕಾಡಿ ಪ್ರಸ್ತುತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಂಡಾಜೆ ಬೆಳ್ತಂಗಡಿ ತಾಲೂಕು ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.



ಛಾಯಾಗ್ರಹಣ : ನಿತೇಶ್ ಕುಂಟಾಡಿ
ಸಂಕಲನ : ವಿವೇಕ್ ಎಸ್. ಕೆ
ಉಪಶೀರ್ಷಿಕೆಗಳು : ಶ್ರೀಕಾಂತ್ ಚಕ್ರವರ್ತಿ

ಪ್ರತಿಕ್ರಿಯಿಸಿ