ಕಾಶಿ ಎಂಬ ರೂಪಕ – ಭಾಗ ೧

ಭೈರಪ್ಪನವರ ಆವರಣ ಕನ್ನಡದಲ್ಲಿ ಅಭೂತಪೂರ್ವ ಯಶಸ್ಸು ಕಂಡ ಕಾದಂಬರಿ. ಬಿಡುಗಡೆಯ ಮಾರನೇ ದಿನವೇ ಮರು ಪ್ರಕಟಣೆಗೊಂಡ ದಾಖಲೆ ಇದರದ್ದು. ಇನ್ನೊಂದು ಕಡೆ ಕನ್ನಡದ ಸಂವೇದನಾಶೀಲ ಮನಸ್ಸುಗಳು ಆವರಣ ಒಂದು ಕಾದಂಬರಿಯೇ ಅಲ್ಲ,  propaganda ಎಂದು ಅದನ್ನ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ . ಜಗತ್ತಿನ ಅತಿ ಪುರಾತನ ನಗರಗಳಲ್ಲಿ ಒಂದಾದ ‘ಕಾಶಿ’ ಯ ಸಣ್ಣ ನಿರೂಪಣೆ ಆವರಣ ಕಾದಂಬರಿಯಲ್ಲಿ ಬರುತ್ತದೆ. ಕಾದಂಬರಿಯ ಪ್ರಮುಖ ಪಾತ್ರವಾದ ‘ಲಕ್ಷ್ಮಿ’ಯ ಕಣ್ಣಲ್ಲಿ ಭೈರಪ್ಪನವರು ಕಾಶಿಯನ್ನು ಕಾಣುತ್ತಾರೆ. ಹಾಗೆಯೇ ಕನ್ನಡದ ಮುಖ್ಯ ಆತ್ಮಕತೆಗಳಲ್ಲಿ ಒಂದಾದ ಬಿ.ವಿ ಕಾರಂತರ ಆತ್ಮಕತೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಯಲ್ಲಿ ಕಾರಂತರು ಕಂಡ ಕಾಶಿಯ ಪ್ರಸ್ತಾಪ ಸುಮಾರು ೯೦ ಪುಟಗಳಷ್ಟು ಬರುತ್ತದೆ. ಇವೆರಡದರ ಜೊತೆಗೆ ಕಳೆದ ವರ್ಷ ಔಟ್ ಲುಕ್ ನಲ್ಲಿ ರಾಮಚಂದ್ರ ಗುಹಾ , ‘ಗಾಂಧಿ ಕಂಡ ಕಾಶಿ’ಯ ಕುರಿತು ಬರೆದಿದ್ದಾರೆ. ಹೀಗೆ, ಭೈರಪ್ಪ, ಜಿ.ರಾಜಶೇಖರ್ ಈ ಮೂರು ಪ್ರತಿಭೆಗಳು- ಭೈರಪ್ಪ,ಕಾರಂತ ಮತ್ತು ಗಾಂಧಿ- ಕಂಡ ಕಾಶಿಯನ್ನ ಕುರಿತು ಇಲ್ಲಿ ವಿವೇಚಿಸಿದ್ದಾರೆ.


One comment to “ಕಾಶಿ ಎಂಬ ರೂಪಕ – ಭಾಗ ೧”
  1. Pingback: ಋತುಮಾನ | ಕಾಶಿ ಎಂಬ ರೂಪಕ – ಭಾಗ ೨

ಪ್ರತಿಕ್ರಿಯಿಸಿ