ಸುಗತ ಸಂದರ್ಶನ ಮುನ್ನೋಟ

ಋತುಮಾನದಲ್ಲಿ ಮುಂದೆ 6 ಕಂತುಗಳಲ್ಲಿ ಪತ್ರಕರ್ತ ಸುಗತ ಶ್ರೀನಿವಾಸರಾಜು ಸಂದರ್ಶನ ಪ್ರಕಟವಾಗಲಿದೆ .ಅದರ ಮುನ್ನೋಟ ಇಲ್ಲಿದೆ .ಸುಗತ ಶ್ರೀನಿವಾಸರಾಜು, ಹಿರಿಯ ಸಾಹಿತಿ ಚಿ ಶ್ರೀನಿವಾಸರಾಜು ಅವರ ಮಗ. 20 ವರ್ಷಗಳ ಕಾಲ ಡೆಕ್ಕನ್ ಹೆರಾಲ್ಡ್, ಹಿಂದುಸ್ತಾನ್ ಟೈಮ್ಸ್, ಔಟ್’ಲುಕ್ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದವರು.2012ರ ಮೇ ಹೊತ್ತಿಗೆ ‘ವಿಜಯ ಕರ್ನಾಟಕ’ ದಿನ ಪತ್ರಿಕೆಯ ಪ್ರಧಾನ ಸಂಪಾದಕರಾಗುವ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ಪದಾರ್ಪಣೆ ಮಾಡಿದ್ದರು. ಮುಂದೆ ಏಷಿಯಾನೆಟ್ ನ್ಯೂಸ್ ನೆಟ್ವರ್ಕ್ ಪ್ರೈ. ಲಿ. (ANPL)ನ ಸಂಪಾದಕೀಯ ನಿರ್ದೇಶಕನರಾಗಿಯೂ, ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ನ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು . ಸಂದರ್ಶದಲ್ಲಿ ಪ್ರಸ್ತುತ ರಾಜಕೀಯ , ಪತ್ರಿಕೋದ್ಯಮದ ಸವಾಲುಗಳು, ಕನ್ನಡದ ಸಾಂಸ್ಕೃತಿಕ ವಲಯ ಮುಂತಾದ ಅನೇಕ ವಿಷಯಗಳ ಕುರಿತು ಸುಗತ ಮಾತನಾಡಿದ್ದಾರೆ .

ಪ್ರತಿಕ್ರಿಯಿಸಿ