ಕುಸುಮಬಾಲೆ – ಓದು : ಎ. ಎಂ. ಶಿವಸ್ವಾಮಿ – ಕಂತು ೩

ಪ್ರಯೋಗದಲ್ಲಿ ಒರಟು ಹಾಗೂ ಶಿಷ್ಟವಲ್ಲದ ದಲಿತ , ಪ್ರಾದೇಶಿಕ ಭಾಷೆಯನ್ನು ಇತರ ಭಾಷಾ ಪ್ರಭೇದಗಳಂತೆಯೇ ಸಮರ್ಥವಾಗಿ ಬಳಸಿ , ಕಣ್ಣೊಡಲ ತುಂಬುವ ಸಶಕ್ತ ರೂಪಕಗಳೊಡನೆ ದೇವನೂರು ಮಹಾದೇವ ಬರೆದ  ಕೃತಿ ‘ಕುಸುಮಬಾಲೆ’ ಕನ್ನಡ ಕಾದಂಬರಿ ಇತಿಹಾಸದಲ್ಲಿ a sudden leap  ಅನ್ನಿಸಿಕೊಂಡು ಹಲವು ಚರ್ಚೆಗೆ ದಾರಿಯಾಯಿತು. ತನ್ನ ವಿಶಿಷ್ಟವಾದ ಕಥನ ಕ್ರಮದಿಂದ ಓದುಗ ಮತ್ತು ವಿಮರ್ಶಕ ವರ್ಗಗಳೆರಡರಿಂದಲೂ ಪ್ರಶಂಶೆಗೆ ಪಾತ್ರವಾಯಿತು .
ಕುಸುಮಬಾಲೆ ಮೊತ್ತ ಮೊದಲನೆಯದಾಗಿ ೧೯೮೫ರಲ್ಲಿ ಸುದ್ದಿ ಸಂಗಾತಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು .  ಅದು ಪುಸ್ತಕರೂಪದಲ್ಲಿ ಹೊರಬಂದದ್ದು ೧೯೮೮ ರಲ್ಲಿ . ಇದಾದ ಮಾರನೆಯ ವರ್ಷದಲ್ಲಿಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ ಮೂಲಕ ಕೃತಿಕಾರ ದೇವನೂರು ಮಹಾದೇವರಿಗೆ  ಕನ್ನಡದಲ್ಲಿ ಆ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಲೇಖಕ ಅನ್ನುವ ಗರಿ ಮೂಡಿಸಿತು .
ಸರಕಾರಿ ಪ್ರಥಮ ದರ್ಜೆ ಕಾಲೇಜು, ನಂಜನಗೂಡಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಎ. ಎಂ. ಶಿವಸ್ವಾಮಿ ಅವರು ಋತುಮಾನಕ್ಕಾಗಿ ಕುಸುಮಬಾಲೆಯನ್ನು ಓದಿದ್ದಾರೆ.


ಕಂತು ೧ : https://ruthumana.com/2019/03/23/kusumabale-reading-a-m-shivsaway-episode-1/
ಕಂತು ೨ : https://ruthumana.com/2019/03/23/kusumabale-reading-a-m-shivsaway-episode-2/

ಪ್ರತಿಕ್ರಿಯಿಸಿ