“ಅಲೆಮಾರಿಗಳು, ಅರಸರು, ವರ್ತಕರು” , ಭಾಷೆಗಳ ಹಾದಿಗುಂಟ ಭಾರತದ ಕಥನ

ಋತುಮಾನ ಪುಸ್ತಕ – ೧೨
“ಅಲೆಮಾರಿಗಳು, ಅರಸರು, ವರ್ತಕರು” , ಭಾಷೆಗಳ ಹಾದಿಗುಂಟ ಭಾರತದ ಕಥನ

ಪುಸ್ತಕ ಬಿಡುಗಡೆ ಜೊತೆಗೆ ನಮ್ಮ ನಿಮ್ಮ ಭೇಟಿ.

ಬನ್ನಿ ಸಿಗೋಣ !

ಪುಸ್ತಕ ಪ್ರೀ ಆರ್ಡರ್ ಗೆ ಋತುಮಾನ ಸ್ಟೋರ್ ವೆಬ್ಸೈಟ್ ಮತ್ತು ಅಪ್ ನಲ್ಲಿ ಲಭ್ಯವಿದೆ.
https://store.ruthumana.com/product/wanderers-kings-merchants/

ಪುಸ್ತಕದ ಕುರಿತು –
*******************

ಬಹುಪಾಲು ಭಾರತೀಯರು ಇರ್ನುಡಿಗರು; ಹಲವರು ಹಲನುಡಿಗರು ಕೂಡ ಆಗಿದ್ದಾರೆ. ಇದಕ್ಕೆ ಕಾರಣವೇನು? ಪೆಗ್ಗಿ ಮೋಹನ್ ಈ ಕುತೂಹಲ ಕೆ ರಳಿಸುವ ಪ್ರಶ್ನೆಯ ಆಳಕ್ಕಿಳಿದು ಅರಸುತ್ತ ಹೋದಾಗ ಭಾರತಕ್ಕೆ ಹೊ ರಗಿನಿಂದ ಆದ ಮತ್ತು ಒಳಗೆಯೇ ನಡೆದ ವಲಸೆಗಳು ನಮ್ಮನ್ನು ರೂಪಿಸಿದ ಬಗೆಗಳನ್ನು ಕಂಡುಕೊಳ್ಳುತ್ತಾರೆ; ನಾವೆಲ್ಲರೂ ಮಿಶ್ರಮೂಲದವರು ಎಂಬುದನ್ನೂ ಅರಿತುಕೊಳ್ಳುತ್ತಾರೆ.

ಆದಿಮ ಸಂಸ್ಕೃತವು ನಾವು ಇಂದು ಸಂಸ್ಕೃತವೆಂದು ಗುರುತಿ ಸುವ ಭಾಷೆಯಾಗಿ ರೂಪಾಂತರಗೊಂಡ ಕಥೆಯ ಮುಖಾಂತರ ವೈದಿಕ ಜನರು ಸ್ಥಳೀಯ ಸಮುದಾ ಯದೊಂದಿಗೆ ಬೆರೆತದ್ದನ್ನು ತಿಳಿಯಪಡಿಸುತ್ತಾರೆ. ನಂಬೂದಿರಿ ಬ್ರಾಹ್ಮಣರು ದಕ್ಷಿಣಣದತ್ತ ವಲಸೆ ಹೋದ ನಂತರ ಮಲಯಾಳಕ್ಕೆ ಸಂಬಂಧಿಸಿದಂತೆಯೂ ಇದೇ ವೃತ್ತಾಂತ ಮರುಕಳಿಸುತ್ತದೆ . ಮರಾಠಿ, ಉರ್ದು ಮತ್ತು ಕೆಲವು ಈಶಾನ್ಯ ಭಾಗದ ಭಾಷೆಗಳು ಕ್ರಮಿಸಿದ ಆಶ್ಚರ್ಯಯನುಕರ ಪಥಗಳು ಅವರಿಗೆ ಎದುರಾಗುತ್ತವೆ . ಅವುಗಳ ಮೂಲಕ ಭಾರತದ ಸಾಮಾಜಿಕ ಇತಿಹಾಸದ ಇದುವರೆಗೂ ಗೊತ್ತಿರದ ನೋಟಗಳು ಅನಾವರಣಗೊಳ್ಳುತ್ತವೆ .

ವರ್ತಮಾನದತ್ತ ಗಮನ ಹರಿಸುತ್ತ ಅವರು ಬ್ರಿಟಿಷರ ನಿರ್ಗನಗಮನದ ನಂತರ ಇಂಗ್ಲಿಷ್ ಭಾಷೆಯು ಪ್ರಾಬಲ್ಯ ಪಡೆದ ವಿರೋಧಾಭಾಸದ ಬಗ್ಗೆ ವಿಸ್ತಾರವಾಗಿ ಹೇಳುತ್ತಾರೆ. ಹಿಂದೆ ಆಡಳಿತ ಭಾಷೆಯಾಗಿ ಅದನ್ನು ಅಳವಡಿಸಿಕೊಂಡದ್ದು ಈಗ ಭಾರತದ ಭಾಷೆಗಳ ಅಸ್ತಿ ತ್ವಕ್ಕೇ ಅಪಾಯ ತಂದೊಡ್ಡಿರುವುದನ್ನು ವಿವರವಾದ ಮತ್ತು ತೀಕ್ಷ್ಣವಾದ ಅವಲೋಕನದ ಮೂಲಕ ತೋರಿಸಿಕೊಡುತ್ತಾರೆ.

‘ಅಲೆಮಾರಿಗಳು ಅರಸರು ವರ್ತಕರು’ ಭಾಷೆಗಳ ಸಾಮಾಜಿಕ-ಚಾರಿತ್ರಿ ಕ ಮೂಲಗಳ ಕುರಿತು ದಶಕಗಳ ಸಂಶೋಧನೆ ಮತ್ತು ಗಾಢವಾದ ಅನುಸಂಧಾನದ ಫಲ. ಹಲವು ಸಹಸ್ರಮಾನಗಳಿಂದ ಭಾರತದಲ್ಲಿ ನಡೆಯುತ್ತಿರುವ ಸಮುದಾಯಗಳ ಪರಸ್ಪರ ಬೆರೆಯುವಿಕೆಯ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ . ಜನಾಂಗೀಯ ‘ಪರಿಶುದ್ಧತೆ’ಯ ಕಲ್ಪನೆಯು ಪ್ರಬಲರಾದವರು ತಮ್ಮ ಅನುಕೂಲಕ್ಕಾ ಗಿ ಹರಡಿದ ಕಟ್ಟುಕತೆಯೆಂದು ಒತ್ತಿ ಹೇಳುತ್ತದೆ.

 

ಪ್ರತಿಕ್ರಿಯಿಸಿ