ಆಡಿಯೋ : ಟಿಪ್ಪು ಸುಲ್ತಾನ್ ಲಾವಣಿ (Recorded 1940- 1950)

ಚರಿತ್ರೆಯನ್ನು ಮಾನವೀಯ ನೆಲೆಯಲ್ಲಿ ಗುರುತಿಸುವಲ್ಲಿ ಜನಪದರ ಪಾತ್ರ ಬಹಳ ಮಹತ್ವದ್ದು. ಲಾವಣಿಗಳು ಜನರೆದೆಯ ಹಾಡು. ಲಾವಣಿಗಳನ್ನು ತಾವಾಗಿ ತಾವೇ ಕಟ್ಟಿಕೊಂಡು ಹಾಡುವವರು ಅನಕ್ಷರಸ್ಥ ತಳಸಮುದಾಯಗಳು. ಬಹುಶ ಟಿಪ್ಪುವಿನ ಮೇಲೆ ಕಟ್ಟಿರುವಷ್ಟು ಲಾವಣಿಗಳು ಇನ್ಯಾವ ರಾಜ , ಜನನಾಯಕನ ಮೇಲೆ ನಮಗೆ ಸಿಕ್ಕಿಲ್ಲ. ಕೋಮುವಾದಿ ಚರಿತ್ರೆ ಬಿಂಬಿಸಲು ಪ್ರಯತ್ನಿಸುವಂತೆ ಜನಪದರ ಕಣ್ಣಿಗೆ ಟಿಪ್ಪು ಕಂಡಿಲ್ಲ ಎನ್ನುವುದಕ್ಕೆ ಈ ಲಾವಣಿಗಳೇ ಸಾಕ್ಷಿ. ಅನೇಕ ಲಾವಣಿಗಳು ಟಿಪ್ಪುವಿನ ಮರಣಾನಂತರ (1799) ಮೈಸೂರು ಸೀಮೆಯಲ್ಲಿ ಹುಟ್ಟಿಕೊಂಡವು ಎಂದು ಜನಪದ ವಿದ್ವಾಂಸರು, ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಅಲ್ಲಿಂದ ಮುಂದೆ ಲಾವಣಿಗಳು ಕರ್ನಾಟಕದ ತುಂಬೆಲ್ಲಾ ಹುಟ್ಟಿಕೊಂಡವು. ಇವುಗಳಲ್ಲಿ “ಭೇಷಕ್ ತಮಾಶಾ ಟೈಗರ್ ನಿಶಾನಾ ಟಿಪ್ಪು ಸುಲ್ತಾನನ ಹೆಸರಾಯ್ತು, ಮಸಲತ್ ಮಾಡಿದ ಮೀರ್ ಸಾದಿಕನಿಗೆ ದೇಶದ್ರೋಹಿ ಎಂಬೆಸರಾಯ್ತು” ಎಂದು ಶುರುವಾಗುವ ಲಾವಣಿ ಬಹಳ ಪ್ರಸಿದ್ಧವಾದದ್ದು. ಇಲ್ಲಿರುವ ಲಾವಣಿಯು ಟಿಪ್ಪುವಿನ ಆಳ್ವಿಕೆ, ಕೊನೆಯ ಮೈಸೂರು ಯುದ್ಧವನ್ನು ಮೆಲುಕು ಹಾಕುತ್ತಾ ಟಿಪ್ಪುವಿನ ಸಾಹಸಗಾಥೆಯನ್ನು ಹೇಳುತ್ತದೆ.

ಟಿಪ್ಪುವಿನ ಕುರಿತಾದ ಅಧ್ಯಯದದಲ್ಲಿ ತೊಡಗಿರುವ ಸ್ವತಂತ್ರ ಇತಿಹಾಸಕಾರ ನಿಧಿನ್ ಒಲಿಕರ ಅವರ ಮೂಲಕ ಈ ರೆಕಾರ್ಡನ್ನು ನಮಗೆ ಒದಗಿಸಿದರು ಬೆಂಗಳೂರಿನ ಅವೆನ್ಯೂ ರೋಡ್ ನಲ್ಲಿರುವ ಬಾಲಾಜಿ ಆಂಟಿಕ್ಸ್ ಆಂಡ್ ಆರ್ಟ್ಸ್ ನ ಮಾಲೀಕರಾದ ಶೀಯುತ ಬಾಲಜಿಯವರು .

ಈ ಲಾವಣಿಯನ್ನು ಸೀತಾಫೋನ್ ಕಂಪೆನಿಯ ಡಿ. ಎನ್ ಸೀತಾರಾಮ ಶೆಟ್ಟಿಯವರು 1940 – 1950 ರ ಸುಮಾರಿಗೆ ಬಾಂಬೈನ ಸ್ಟುಡಿಯೋವೊಂದರಲ್ಲಿ ರೆಕಾರ್ಡ್ ಮಾಡಿಕೊಂಡರು.

Spec : 10″ 78rpm shellac records

ನಮ್ಮ ಈ ದಾಖಲೀಕರಣಕ್ಕಾಗಿ ಶಿವಮೊಗ್ಗದ ಎಸ್. ಮೊಹಮ್ಮದ್ ಇದ್ರೀಸ್ ಅವರ ಗ್ರಾಮಫೋನ್ ಬಳಸಿಕೊಳ್ಳಲಾಗಿದೆ.


 

ಶಿಕಾರಪುರದ ತಿಪ್ಪಾಜಿಯವರು ಚಿತ್ರಿಸಿದ ಟಿಪ್ಪುವಿನ ಚಿತ್ರ. 1790ರಲ್ಲಿ ಟಿಪ್ಪು ಶಿಕಾರಪುರಕ್ಕೆ ಭೇಟಿಕೊಟ್ಟಾಗ ತಿಪ್ಪಾಜಿಯವರು ಅಲ್ಲಿಗೆ ಹೋಗಿ ಈ ಚಿತ್ರ ಬಿಡಿಸಿದರೆಂಬ ಪ್ರತೀತಿ ಇದೆ . ಈ ವರೆಗೆ ಗುರುತಿಸಲಾದ ಟಿಪ್ಪುವಿನ ಚಿತ್ರ ಬಿಡಿಸಿದ ಭಾರತೀಯ ಚಿತ್ರಕಾರರು ಬಹುಶ : ಇವರೊಬ್ಬರೇ. ಇನ್ನುಳಿದ ಚಿತ್ರಕಾರರ ಮಾಹಿತಿಗಳು ಈ ವರೆಗೆ ಲಭ್ಯವಿಲ್ಲ.

 

 

 

 

 

 

 


 

ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು.

ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

Download RUTHUMANA App here :

** Android *** : https://play.google.com/store/apps/details?id=ruthumana.app

** iphone ** : https://apps.apple.com/in/app/ruthumana/id1493346225

 

ಪ್ರತಿಕ್ರಿಯಿಸಿ