ಹೊಸ ಈ-ಬುಕ್‍ : ವೈಕಂ ಮಹಮದ್ ಬಷೀರ್ ಕಾದಂಬರಿ ‘ನನ್ನಜ್ಜನಿಗೊಂದಾನೆಯಿತ್ತು’

ನಿಸ್ಸಂದೇಹವಾಗಿ ಭಾರತದ ಅತ್ಯಂತ ಮಹತ್ವದ ಲೇಖಕರಾಗಿರುವ ವೈಕಂ ಅವರ ಅಪೂರ್ವ ಕಲಾಕೃತಿ ‘ನನ್ನಜ್ಜನಿಗೊಂದಾನೆಯಿತ್ತು ‘. ಅತ್ಯಂತ ಗಂಭೀರ ವಸ್ತುವನ್ನು ವಿಡಂಬನೆ ತುಂಬಿದ ಸರಳ ಭಾಷೆಯಲ್ಲಿ ನಿರೂಪಿಸುವ ವೈಕಂ ಅವರ ಈ ಕಿರು ಕಾದಂಬರಿ ಮತ್ತೆ ಮತ್ತೆ ಓದಿಸಿಕೊಳ್ಳುವ ಗುಣ ಹೊಂದಿದೆ 1951 ರಲ್ಲೀ ಬಂದ ಈ ಕಾದಂಬರಿ ತನ್ನ ಸಂಸ್ಕೃತಿ ಯೊಳಗಿನ ಹುಳುಕುಗಳನ್ನು ಎತ್ತಿ ತೋರಿಸುತ್ತಲೇ ಕುಂಜು ಪಾತಮ್ಮಳ ಮುಗ್ದ ಲೋಕವನ್ನು ಸಂಪ್ರದಾಯಗಳು ಹೇಗೆ ಪ್ರಭಾವಿಸುತ್ತವೆ ಎಂಬುವುದನ್ನ ಓದುಗರೆದುರಿಗೆ ಒಂದು ಹಿಡಿ ಹಾಸ್ಯ ಒಂದು ಹಿಡಿ ಪ್ರೀತಿ ಯೊಂದಿಗೆ ತೆರೆದಿಡುತ್ತದೆ. ಕುಂಜುಪಾತಮ್ಮಳ ಆನೆ ಕತೆ ಈಗ ಈ ಬುಕ್ ರೂಪದಲ್ಲಿ ಋತುಮಾನ ಆಪ್ ನಲ್ಲಿ ಲಭ್ಯ. ನೀವು ಬೆಪುರದ ಸುಲ್ತಾನ ವೈಕಂ ಮಹಮದ್ ಬಷೀರ್ ಅವರ ಸಾಹಿತ್ಯ ಜಗತ್ತನ್ನು ಪ್ರವೇಶಿಸಲು ‘ನನ್ನಜ್ಜನಿಗೊಂದಾನೆಯಿತ್ತು ‘ ಸರಿಯಾದ ಆಯ್ಕೆ.

ಋತುಮಾನ ಆ್ಯಪ್ ನಲ್ಲಿ ‘E Book’ ವಿಭಾಗದಲ್ಲಿ ನೀವಿದನ್ನು ಕೊಳ್ಳಬಹುದು. ಆ್ಯಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ / ಆಪಲ್ ಆ್ಯಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ.

Download RUTHUMANA App here :

ಪ್ರತಿಕ್ರಿಯಿಸಿ