ಕನ್ನಡಕ್ಕೆ ಅನೇಕ ಹೊಸ ಬರಹಗಾರನ್ನು ಪರಿಚಯಿಸಿದ ಛಂದ ಪುಸ್ತಕದ ಕೃತಿಗಳ ಇ ಪುಸ್ತಕ ಈಗ ಋತುಮಾನ ಆ್ಯಪ್ ನಲ್ಲಿ ಲಭ್ಯ !
೨೦೦೪ರಲ್ಲಿ ಸ್ಥಾಪನೆಯಾದ ಛಂದ ಪುಸ್ತಕ ಪ್ರಕಾಶನ ಸಂಸ್ಥೆ ಇಲ್ಲಿಯವರೆಗೆ ಸುಮಾರು ನೂರರಷ್ಟು ಕೃತಿಗಳನ್ನು ಪ್ರಕಟಿಸಿದೆ. ನಾಡಿನ ಪ್ರತಿಷ್ಠಿತ ಪ್ರಶಸ್ತಿಗಳನ್ನುಗಳಿಸಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ “ಯುವ ಪುರಸ್ಕಾರ” ಪ್ರಶಸ್ತಿಯು ಈ ಸಂಸ್ಥೆಗೆ ಸಂದಿದೆ. ಅನುವಾದ ಕಾರ್ಯವನ್ನೂ ನಿರಂತರವಾಗಿ ಈ ಸಂಸ್ಥೆ ಮಾಡುತ್ತಲೇ ಬಂದಿದೆ. ಜಗತ್ತಿನ ವಿಭಿನ್ನ ಸಂಸ್ಕೃತಿಗಳನ್ನು, ಜಗತ್ತು ಎದುರಿಸಿದ ಸವಾಲುಗಳನ್ನೂ ಅರ್ಥ ಮಾಡಿಕೊಳ್ಳಬಹುದಾದ ಆತ್ಮಚರಿತ್ರೆ, ಇತಿಹಾಸದ ಕೃತಿಗಳು, ಸೃಜನಶೀಲ ಬರವಣಿಗೆಗಳನ್ನು ಬಹುಗಂಭೀರವಾಗಿ ಪರಿಗಣಿಸಿದೆ.
ಕನ್ನಡದ ಜನಪ್ರಿಯ ಲೇಖಕರಾದ ವಸುಧೇಂದ್ರ ಅವರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿ ನಡೆಸಿಕೊಂಡು ಹೋಗುತ್ತಿದ್ದಾರೆ. ಛಂದ ಪುಸ್ತಕದ ಹುಟ್ಟು ಮತ್ತು ಈ ತನಕದ ಬೆಳವಣಿಗೆಯ ಪ್ರಮುಖ ಕಾಲಘಟ್ಟಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
Download RUTHUMANA App here :
** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225
ಈ ಕೆಳಗಿನ ಕೂಪನ್ ಬಳಸಿ . ವಿಶೇಷ ರಿಯಾಯಿತಿ ಪಡೆಯಿರಿ.
MEAFL20 – 20% off on ebooks and audio books
MBEAFL15 – 15% off on Books . Min order ₹ 200